ಗುರುವಾರ, ಆಗಸ್ಟ್ 12, 2021

ನಾಗ ಪಂಚಮಿ



 ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.

ಪುರಾಣ

ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು 'ಸರ್ಪಯಜ್ಞ'ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

ಮಹಾತ್ಮೆ

ತ್ರೇತಾಯುಗದಲ್ಲಿ ಶ್ರೀವಿಷ್ಣು ರಾಮನ ಅವತಾರವನ್ನು ಎತ್ತಿದಾಗ, ಶೇಷನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು.

  ಒಟ್ಟಾರೆ ನಾಗರಪಂಚಮಿ ನಾಡಿನಲ್ಲಿ ದೊಡ್ಡ ಹಬ್ಬವಾಗಿದೆ. ಹಬ್ಬದ ಹೆಸರಲ್ಲಿ ನಿಜವಾದ ಹಾವುಗಳಿಗೆ ಹಾಲು ಎರೆಯಲು ಹೋಗಿ ಅಪಾಯ ಎಳೆದುಕೊಳ್ಳದಿರುವುದು ಒಳಿತು.

ಸೋಮವಾರ, ಜುಲೈ 19, 2021

ಜೀವನ

 ತಾಯ ಹೃದಯ ಕಮಲದಲ್ಲಿ ಅರಳುವುದೇ ಜೀವನ
ತೊದಲ ನುಡಿಯ ತಪ್ಪುಗಳೇ ಜೀವನ
ಮೊದಲ ಗುರುವಿನಿಂದ ಕಲಿತ ಪಾಠವೇ ಜೀವನ
ಸುಂದರ ದಿನಗಳ ಅರ್ಥೈಸಿಕೊಳ್ಳುವುದೇ ಜೀವನ
ಸರ್ವರ ನುಡಿ ಕಲಿತು ಸರ್ವಜ್ಞನಾಗುವುದೇ ಜೀವನ
ಗುರಿಯರಿತು ಸಾಧಿಸುವುದೇ ಜೀವನ
ಸಮಸ್ಯೆಗಳ ಬೆನ್ನಟ್ಟುವ ದೈರ್ಯವೇ ಜೀವನ
ತನು ಮನವ ಶುದ್ಧಿಕರಣವೇ ಜೀವನ
ಆದರ್ಶ ಮೌಲ್ಯವುಳ್ಳ ಸಮಾಜ ನಿರ್ಮಾಣವೇ ಜೀವನ
ಉದ್ದಕ್ಕೂ ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳುವುದೇ ಜೀವನ
ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದೇ ಜೀವನ
ಸಂಸಾರದ ಹಣತೆಯಲ್ಲಿ ಬೆಳಕಾಗುವುದೇ ಜೀವನ
ನಿಸರ್ಗ ನಿಯಮಗಳ ಅರಿಯುವುದೇ ಜೀವನ
ನೆಲೆ ನಿಲ್ಲಲು ಅವಕಾಶವೇ ಇಲ್ಲದ ಜೀವನ
ಕೊನೆಗೊಂದು ದಿನ ಜೀವನದ ಅಂತ್ಯವೇ ಜೀವನ.


ನನ್ನಾಸೆ.

ಜಗತ್ತನೇ ಬೆಳಗುವ ಸೂರ್ಯನ ಹಾಗೆ ಪ್ರಜ್ವಲಿಸುವಾಸೆ,
ಗ್ರಹ ತಾರೆಯರ ಜೊತೆ ಆಟವಾಡುವಾಸೆ,
ತಿಂಗಳನ ಬೆಳಕಲ್ಲಿ ಮಿಯುವಾಸೆ,
ಹಚ್ಚ ಹಸುರಿನ ಮರದಲ್ಲಿ ಚಿಗುರುವಾಸೆ,
ಹಕ್ಕಿಗಳ ಕೊರಳ ಸ್ವರವಾಗುವಾಸೆ,
ಜೇನಗೂಡಲ್ಲಿ ಬೆರೆತು ಒಗ್ಗಟ್ಟು ಪ್ರದರ್ಶಿಸುವಾಸೆ,
ದುಂಬಿಗೆ ಆಹಾರ ನೀಡುವ ಹೂವಾಗುವಾಸೆ,

ಅನ್ನದಾತನ ಬಾಳ ಬೆಳಗುವ ವರ್ಷವಾಗುವಾಸೆ,
ಹಣತೆಯ ತೈಲದಲ್ಲಿ ಬೆರೆತು ಬೆಳಕಾಗುವಾಸೆ,
ಕೆಟ್ಟವರ ಹೃದಯದಲ್ಲಿ ಕುಳಿತು ಬದಲಾಯಿಸುವಾಸೆ,
ಬಸವನುದಿಸಲಿ ಎಂದು ತಪಗೈಯುವಾಸೆ,
ಬುದ್ಧ, ಗಾಂಧೀಯರ ಶಾಂತಿ ಮಂತ್ರವ ಪಠಿಸುವಾಸೆ,

ಭಾರತಾಂಬೆಯನ್ನು ನಭದೆತ್ತರಕ್ಕೆ ಬೆಳಗಿಸುವಾಸೆ........
ಈ ಆಸೆಯ ಈಡೆರಿಸುವಾಸೆಗೆ ಬಲ ನೀಡುವರಾರು? ಯಾರು?

ಯಾರು? ........              


ಬುಧವಾರ, ಜುಲೈ 14, 2021

8ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು

 

BHIRADI HIGH SCHOOL BHIRADI            8ನೇ ತರಗತಿಯ ವಿಜ್ಞಾನ ವಿದ್ಯಾಗಮ ಸಂವೇದ ವೀಡಿಯೋ ಪಾಠಗಳು
ಕ್ರ.ಸಂ.ಅಧ್ಯಾಯದ ಹೆಸರುVideo Link
1ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-1ವೀಕ್ಷಿಸಿ
2ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-2ವೀಕ್ಷಿಸಿ
3ಬೆಳೆಗಳ ಉತ್ಪಾದನೆ & ನಿರ್ವಹಣೆ ಭಾಗ-3ವೀಕ್ಷಿಸಿ
4ಬಲ ಮತ್ತು ಒತ್ತಡ ಭಾಗ-1ವೀಕ್ಷಿಸಿ
5ಬಲ ಮತ್ತು ಒತ್ತಡ ಭಾಗ-2ವೀಕ್ಷಿಸಿ
6ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-1ವೀಕ್ಷಿಸಿ
7ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-2ವೀಕ್ಷಿಸಿ
8ಸಂಶ್ಲೇಷಿತ ಎಳೆಗಳು & ಪ್ಲಾಸ್ಟಿಕ್ ಗಳು ಭಾಗ-3ವೀಕ್ಷಿಸಿ
9ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-1ವೀಕ್ಷಿಸಿ
10ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-2ವೀಕ್ಷಿಸಿ
11ಸೂಕ್ಷ್ಮಜೀವಿಗಳು ಮಿತ್ತ & ಶತ್ರು ಭಾಗ-3ವೀಕ್ಷಿಸಿ
12ಘರ್ಷಣೆ ಭಾಗ-1ವೀಕ್ಷಿಸಿ
13ಘರ್ಷಣೆ ಭಾಗ-2ವೀಕ್ಷಿಸಿ
14ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-1ವೀಕ್ಷಿಸಿ
15ಕಲ್ಲಿದ್ದಲು ಮತ್ತು ಪೆಟ್ರೋಲ್ ಭಾಗ-2ವೀಕ್ಷಿಸಿ
16ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-1ವೀಕ್ಷಿಸಿ
17ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-2ವೀಕ್ಷಿಸಿ
18ಸಸ್ಯಗಳು & ಪ್ರಾಣಿಗಳ ಸಂರಕ್ಷಣೆ ಭಾಗ-3ವೀಕ್ಷಿಸಿ
19ಶಬ್ದ ಭಾಗ-1ವೀಕ್ಷಿಸಿ
20ಶಬ್ದ ಭಾಗ-2ವೀಕ್ಷಿಸಿ
21ಶಬ್ದ ಭಾಗ-3ವೀಕ್ಷಿಸಿ
22ದಹನ ಮತ್ತು ಜ್ಞಾಲೆ ಭಾಗ-1ವೀಕ್ಷಿಸಿ
23ದಹನ ಮತ್ತು ಜ್ಞಾಲೆ ಭಾಗ-2ವೀಕ್ಷಿಸಿ
24ದಹನ ಮತ್ತು ಜ್ಞಾಲೆ ಭಾಗ-3ವೀಕ್ಷಿಸಿ
25ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಭಾಗ-1ವೀಕ್ಷಿಸಿ
26ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಭಾಗ-2ವೀಕ್ಷಿಸಿ
27ಕೆಲವು ನೈಸರ್ಗಿಕ ವಿದ್ಯಮಾನಗಳು ಭಾಗ-1ವೀಕ್ಷಿಸಿ
28ಕೆಲವು ನೈಸರ್ಗಿಕ ವಿದ್ಯಮಾನಗಳು ಭಾಗ-2ವೀಕ್ಷಿಸಿ
29ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಭಾಗ-1ವೀಕ್ಷಿಸಿ
30ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮಗಳು ಭಾಗ-2ವೀಕ್ಷಿಸಿ
31ಹದಿಯರೆಯಕ್ಕೆ ಪ್ರವೇಶ ಭಾಗ-1ವೀಕ್ಷಿಸಿ
32ಹದಿಯರೆಯಕ್ಕೆ ಪ್ರವೇಶ ಭಾಗ-2ವೀಕ್ಷಿಸಿ
33ಬೆಳಕು ಭಾಗ-1ವೀಕ್ಷಿಸಿ
34ಬೆಳಕು ಭಾಗ-2ವೀಕ್ಷಿಸಿ
35ಬೆಳಕು ಭಾಗ-3ವೀಕ್ಷಿಸಿ
36ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-1ವೀಕ್ಷಿಸಿ
37ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-2ವೀಕ್ಷಿಸಿ
38ನಕ್ಷತ್ರಗಳು ಮತ್ತು ಸೌರಮಂಡಲ ಭಾಗ-3ವೀಕ್ಷಿಸಿ
39ವಾಯುಮಾಲಿನ್ಯ & ಜಲಮಾಲಿನ್ಯ ಭಾಗ-1ವೀಕ್ಷಿಸಿ
40ವಾಯುಮಾಲಿನ್ಯ & ಜಲಮಾಲಿನ್ಯ ಭಾಗ-2ವೀಕ್ಷಿಸಿ